ಮೂಡುಬಿದಿರೆಯಲ್ಲಿ ಬಸ್ ಏಜೆಂಟ್ ಮತ್ತು ನಿರ್ವಾಹಕರಾಗಿದ್ದ ಗಣೇಶ್ (45) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಬೆಳಿಗ್ಗೆ ಮೂಡುಬಿದಿರೆ ಪೇಟೆಗೆ ಬಂದವರು ಪತ್ರಿಕೆ, ಹೂ ಇತ್ಯಾದಿಮನೆಗೆ ತೆಗೆದುಕೊಂಡು ಹೋದವರಿಗೆ ಎದೆನೋವು ಕಾಣಿಸಿಕೊಂಡಿದೆ.
ತಕ್ಷಣ ಅವರನ್ನು ಜಿ.ವಿ. ಪೈ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅಲ್ಲಿ ಅವರು ಹೃದಯಾಘಾತ ದಿಂದ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಗಣೇಶ್ ಅವರಿಗೆ ಈ ಹಿಂದೊಮ್ಮೆ ಹೃದಯಾಘಾತವಾಗಿದ್ದು ಚಿಕಿತ್ಸೆಯ ನಂತರ ಅವರು ಸುಧಾರಿಸಿಕೊಂಡಿದ್ದರು. ಮೂಡುಬಿದಿರೆಯಲ್ಲಿ ಹಲವು ವರ್ಷಗಳಿಂದ ಬಸ್ ಸಿಬ್ಬಂದಿಯಾಗಿ, ಬೇರೆ ವಾಹನಗಳ ಚಾಲಕನಾಗಿ ದುಡಿಯುತ್ತಾ ಜನಾನುರಾಗಿಯಾಗಿದ್ದರು.