ಶಶಿಧರ ಬಿ. ಶೆಟ್ಟಿ ಬರೋಡ ಅವರಿಗೆ ಮಾತೃವಿಯೋಗ


ಮುಂಬಯಿ: ಕರ್ನಾಟಕ ಕರಾವಳಿಯ ಬೆಳ್ತಂಗಡಿ ತಾಲೂಕು ಗುರುವಾಯನಕೆರೆ ಕುವೆಟ್ಟು ಇಲ್ಲಿನ ಶಕ್ತಿನಗರದ ನವಶಕ್ತಿ ನಿವಾಸಿ ಕಾಶಿ ಬಾಬು ಶೆಟ್ಟಿ ಕುವೆಟ್ಟು (90.) ಸೋಮವಾರ ಮುಂಜಾನೆ ವೃದ್ಧಾಪ್ಯ ಸಹಜತೆಯಿಂದ ತನ್ನ ಸ್ವನಿವಾಸದಲ್ಲಿ ನಿಧನರಾದರು.

ಮೃತರು ಆರು ಸುಪುತ್ರರು (ರಾಷ್ಟ್ರದ ಪ್ರತಿಷ್ಠಿತ ಕ್ಯಾಟರಿಂಗ್ ಸರ್ವಿಸ್‌ಗಳಲ್ಲಿ ಒಂದೆನಿಸಿದ ಶಶಿ ಕೇಟರಿಂಗ್ ಸರ್ವಿಸ್‌ನ ಮಾಲಿಕ, ಹೆಸರಾಂತ ಉದ್ಯಮಿ, ಕೊಡುಗೈದಾನಿ, ಗುಜರಾತ್ ತುಳು ಸಂಘ ಬರೋಡ ಅಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟç ಸಲಹಾ ಸಮಿತಿ ಸದಸ್ಯ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂ ರು ಗುಜರಾತ್ ರಾಜ್ಯ ಘಟಕದ ಪ್ರಧಾನ ಸಂಘಟಕ ಶಶಿಧರ ಬಿ. ಶೆಟ್ಟಿ ಗುರುವಾಯನಕೆರೆ), ಹೆಸರಾಂತ ಉದ್ಯಮಿಗಳಾದ ಶ್ರೀನಿವಾಸ ಬಿ. ಶೆಟ್ಟಿ (ಬರೋಡ), ಜಯರಾಮ ಬಿ. ಶೆಟ್ಟಿ (ದೆಹಲಿ), ಹರೀಶ್ ಬಿ. ಶೆಟ್ಟಿ (ದೆಹಲಿ), ಪ್ರಶಾಂತ್ ಬಿ. ಶೆಟ್ಟಿ (ಬರೋಡ), ರಾಜೇಶ್ ಬಿ. ಶೆಟ್ಟಿ (ಗುರುವಾಯನಕೆರೆ) ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕಾಶಿ ಬಿ. ಶೆಟ್ಟಿ ನಿಧನಕ್ಕೆ ತುಳು ಸಂಘ ಬರೋಡಾ ಗೌರವಾಧ್ಯಕ್ಷ ದಯಾನಂದ ಬೊಂಟ್ರ (ಬೆಳ್ಮಣ್ಣು), ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಸಂಸ್ಥಾಪಕಾಧ್ಯಕ್ಷ ಯಕ್ಷಚಕ್ರೇಶ್ವರ ಸತೀಶ್ ಶೆಟ್ಟಿ ಪಟ್ಲ, ಗುಜರಾತ್ ಘಟಕಧ್ಯಕ್ಷ ಅಜಿತ್ ಶೆಟ್ಟಿ, ಗುಜರಾತ್ ಬಿಲ್ಲವ ಸಂಘ ಸ್ಥಾಪಕ ರೂವಾರಿ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್, ನಿಕಟಪೂರ್ವ ಅಧ್ಯಕ್ಷ ಮನೋಜ್ ಸಿ. ಪೂಜಾರಿ ಸೂರತ್, ಅಧ್ಯಕ್ಷ ಹರೀಶ್ ವಿ. ಪೂಜಾರಿ ದೇರಳಕಟ್ಟೆ, ಅಂಕ್ಲೇಶ್ವರ್ ಬಂಟ್ಸ್ ಸಂಘ ಅಹಮದಾಬಾದ್ ಗುಜರಾತ್ ಅಧ್ಯಕ್ಷ ಶಿರ್ವಾ ಕೋಡು ನಿತೇಶ್ ಎಸ್. ಶೆಟ್ಟಿ, ಗುಜರಾತ್‌ನ ಪ್ರಸಿದ್ಧ ಉದ್ಯಮಿಗಳಾದ ರವಿನಾಥ್ ಶೆಟ್ಟಿ ಅಂಕ್ಲೇಶ್ವರ್, ಶಿವರಾಮ ಶೆಟ್ಟಿ ಬಿ. ಸೂರತ್, ಶಂಕರ್ ಶೆಟ್ಟಿ ಅಂಕ್ಲೇಶ್ವರ್, ತುಳುನಾಡ ಐಸಿರಿ ವಾಪಿ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಅಧ್ಯಕ್ಷ ನವೀನ್ ಎಸ್. ಶೆಟ್ಟಿ ಹೇರೂರು, ಸುಕೇಶ್ ಶೆಟ್ಟಿ (ಹನಿ ಗಾರ್ಡನ್) ವಾಪಿ, ವೆಂಕಟೇಶ್ ಪೂಜಾರಿ ಇರುವೈಲು (ಸಿಲ್ವಾಸ) ಸೇರಿದಂತೆ ನೂರಾರು ಗಣ್ಯರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಕೋರಿದ್ದಾರೆ.

Previous Post Next Post

Contact Form