ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸುರೇಶ್ ಕೋಟ್ಯಾನ್


 ಮೂಡುಬಿದಿರೆ: ಕಲ್ಲಬೆಟ್ಟು  ಸೇವಾ ಸಹಕಾರಿ ಸಂಘ(ನಿ) ಇದರ  ನೂತನ ಅಧ್ಯಕ್ಷರಾಗಿ ಸುರೇಶ್ ಕೋಟ್ಯಾನ್ ಹಾಗೂ  ಉಪಾಧ್ಯಕ್ಷರಾಗಿ ದಿಲೀಪ್ ಕುಮಾರ್ ಶೆಟ್ಟಿ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಯ 13 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತ 9 ಮತ್ತು ಬಿಜೆಪಿ ಬೆಂಬಲಿತ 4 ನಿರ್ದೇಶಕರು ಇದ್ದಾರೆ.

 ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಚಿಂತನ್ ಸಿಲ್ವನ್  ಲೋಬೊ ಕೂಡ ನಾಮಪತ್ರ ಸಲ್ಲಿಸಿದ್ದರು ಬಳಿಕ ಅವರು ನಾಮಪತ್ರ ಹಿಂಪಡಕೊಂಡಿದ್ದರಿ ಂದ ಉಪಾಧ್ಯಕ್ಷರಾಗಿ ದಿಲೀಪ್ ಶೆಟ್ಟಿ ಅವಿರೋಧ ಆಯ್ಕೆಯಾದರು.

ಚುನಾವಣಾಧಿಕಾರಿ,  ತಾಲ್ಲೂಕು ಸಹಕಾರ ಅಭಿವ್ರದ್ಧಿ ಅಧಿಕಾರಿ ವಿಲಾಸ್ ಕುಮಾರ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಸಿಇಒ ಅನಿತಾ ಆರ್.  ಶೆಟ್ಟಿ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು‌. 

ನಿರ್ಗಮನ ಅಧ್ಯಕ್ಷ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಅಲ್ವಿನ್ ಮಿನೇಜಸ್ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.

Previous Post Next Post

Contact Form