ಅಯಸ್ಕಾಂತ ನುಂಗಿದ 5 ವರ್ಷದ ಮಗು

ಲಕ್ನೋ: 5 ವರ್ಷದ ಮಗುವೊಂದು ಆಟವಾಡುತ್ತಾ ಅಯಸ್ಕಾಂತ ನುಂಗಿದ ಘಟನೆ ಶನಿವಾರ ಲಕ್ನೋದಲ್ಲಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ಉತ್ತರ ಪ್ರದೇಶ ಬಿಜೆಪಿ ಪ್ರದಾನ ಕಾರ್ಯದರ್ಶಿ ಅಮರಪಾಲ್ ಮೌರ್ಯ ಅವರ ಪುತ್ರ ಪಾರ್ಥ ಸಾರಥಿಯನ್ನು ಕೂಡಲೇ ರಾಮ್ ಮನೋಹರ್ ಆರೋಗ್ಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಗೆ ತರಲಾಗಿದ್ದು, ಇದೀಗ ವೈದ್ಯರು ಮಗುವನ್ನು ಡಿಸ್ಚಾರ್ಜ್ ಮಾಡಿದ್ದಾರೆ.

ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ಆಟವಾಡುತ್ತಿದ್ದ ಮಗು ಅಕಸ್ಮಾತ್ ಅಯಸ್ಕಾಂತವನ್ನು ನುಂಗಿದ್ದು, ಅನಂತರ ಉಸಿರಾಟದ ಸಮಸ್ಯೆ ಎದುರಾಗಿದೆ.

ಆಸ್ಪತ್ರೆಯಲ್ಲಿ ಕೂಡಲೇ ಎಕ್ಸ್-ರೇ ಮಾಡಿದ್ದು ಬಾಲಕನ ಹೊಟ್ಟೆಯಲ್ಲಿ ಸುಮಾರು ಒಂದು ಇಂಚು ಉದ್ದದ ಅಯಸ್ಕಾಂತ ಇರುವುದು ಕಂಡು ಬಂದಿದೆ ಎಂದು ಆಸ್ಪತ್ರೆಯ ಸುಪರಿಂಟೆಂಡೆಂಟ್ ಡಾ| ವಿಕ್ರಂ ಸಿಂಗ್ ತಿಳಿಸಿದ್ದಾರೆ. ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲ ಎಂದಿರುವ ವೈದ್ಯರು, ಮಲದೊಂದಿಗೆ ಅಯಸ್ಕಾಂತ ಹೊರಹೋಗುವ ಬಗ್ಗೆ ತಿಳಿಸಿದ್ದಾರೆ. ಅದಾಗ್ಯೂ ಪುನಃ ನೋವು ಕಂಡು ಬಂದರೆ ಚಿಕಿತ್ಸೆ ನೀಡಬೇಕಾಗುತ್ತದೆ. ಮಗದೊಮ್ಮೆ ಎಕ್ಸ್-ರೇ ಮಾಡಿ ಪರಿಸ್ಥಿತಿಯ ಬಗ್ಗೆ ಖಚಿತ ಪಡಿಸಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

Previous Post Next Post

Contact Form