ನಾಯಿ ಕಡಿತಕ್ಕೆ ಚಿಕಿತ್ಸೆ ನಿರಾಕರಿಸಿದ ವ್ಯಕ್ತಿ ಮೃತ್ಯು


ಮೂಡುಬಿದಿರೆ: ಮೂರು ತಿಂಗಳ ಹಿಂದೆ ನಾಯಿ ಕಚ್ಚಿದ ಗಾಯಕ್ಕೆ ಯಾವುದೇ ಚಿಕಿತ್ಸೆ ಪಡೆಯದೆ ಇದ್ದ ಕಾರಣ ಅಯ್ಯಪ್ಪನ್‌ (೩೧) ಎಂಬವರು ರೇಬೀಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಘಟನೆ ಕನ್ಯಾಕುಮಾರಿ ಜಿಲ್ಲೆಯ ಕವಲ್ ಕಿನಾರು ಪ್ರದೇಶದಲ್ಲಿರುವ ನಡೆದಿದೆ.

ಪೊಲೀಸ್ ಮತ್ತು ಆಸ್ಪತ್ರೆ ಮೂಲಗಳ ಪ್ರಕಾರ, ಅಯ್ಯಪ್ಪನ್ ಅವರಿಗೆ ಮೂರು ತಿಂಗಳ ಹಿಂದೆ ನಾಯಿಯೊಂದು ಕಚ್ಚಿತ್ತು. ಆದರೆ ಅವರು ಗಾಯವನ್ನು ತೀವ್ರವಾಗಿ ಪರಿಗಣಿಸದೇ, ರೇಬೀಸ್‌ಗಾಗಿ ಅಗತ್ಯವಿರುವ ಲಸಿಕೆ ಅಥವಾ ವೈದ್ಯಕೀಯ ತಪಾಸಣೆ ಯಾವುದನ್ನೂ ಮಾಡಿಸಿಕೊಂಡಿರಲಿಲ್ಲ.

ಅಸಾರಿಪಳ್ಳಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ಲಿಯೋ ಡೇವಿಡ್ ಅವರು ನೀಡಿದ ಮಾಹಿತಿಯಲ್ಲಿ, ಅಯ್ಯಪ್ಪನ್ ರೇಬೀಸ್‌ನಿಂದ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. 

ಅವರನ್ನು ಮೊದಲು ಎರಡು ಖಾಸಗಿ ಆಸ್ಪತ್ರೆಗಳಿಗೆ ತೆಗೆದುಕೊಂಡು ಹೋಗಲಾಗಿತ್ತು, ನಂತರ ಅಸಾರಿಪಳ್ಳಂ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ವೈದ್ಯರ ಎಲ್ಲಾ ಪ್ರಯತ್ನಗಳ ನಡುವೆಯೂ ಅವರು ಮೃತಪಟ್ಟರು.


Previous Post Next Post

Contact Form